text
stringlengths 0
2.67k
|
---|
ಶಿಲಾಬರಹದಲ್ಲಿರುವ ಪಠ್ಯ |
ಬದಲಾಯಿಸಿ |
ಇತಿಹಾಸ ದರ್ಪಣ ಸಂಪುಟ ೩೬-೩೮, ೨೦೧೮ರಲ್ಲಿ ಪಿ.ವಿ.ಕೃಷ್ಣಮೂರ್ತಿಯವರಿಂದ ಪ್ರಕಟಗೊಂಡಿರುವಂತೆ ಈ ಶಿಲಾಬರಹದಲ್ಲಿನ ಪಠ್ಯ ಈ ಕೆಳಗಿನಂತಿದೆ[೪]. |
ಸ್ವಸ್ತಿ ಶ್ರೀ ಸಿರಿಪುರುಷ ಮಹಾರಾಜಾ ಪ್ರಥುವೀ ರಾಜ್ಯಂಗೆಯ್ಯೆ |
ಪೆರ್ಬ್ಬೊಳಲ್ನಾಡು ಮೂವತ್ತುಮಾನ್ಪೆೞ್ನಾಗತ್ತರಸರಾಳೆ ಆರ |
ಕಮ್ಮೊಱರ ಮೈಂದುನಂ ಕೊಡನ್ದಲೆಯರ ಕಿತ್ತಯನಾ ರಟ್ಟವಾ |
ಡಿ ಕೂಚಿ ತನ್ದೊಡೆ ಊರೞಿವಿನೂಳೆಱಿದಿನ್ದ್ರಕ ಪುಕಾನ್ |
ಪೆರ್ಗುನ್ದಿಯು ಕಿಱುಗುನ್ದಿ ತಮ್ಮ ಕುರ್ಳ್ನಿಱಿದೊದು ಇ ಕಲ್ಲುಂ |
ಅರ್ಥವಿವರಣೆ |
ಬದಲಾಯಿಸಿ |
ಶಿಲಾಬರಹದ ಅರ್ಥ ಈ ರೀತಿ ಇದೆ. |
ಶ್ರೀಪುರುಷ ಮಹಾರಾಜನು ಭೂಮಿಯನ್ನು ಆಳುತ್ತಿದ್ದಾಗ ಪೆರ್ಬ್ಬೊಳಲನಾಡು-ಮೂವತ್ತನ್ನು ಪೆಳ್ನಾಗತ್ತರಸನು ಆಳುತ್ತಿರಲು ಆರಕಮ್ಮೊರ ಎಂಬ ವ್ಯಕ್ತಿಯ ಮೈದುನ ಕೊಡನ್ದಲೆ ಕಿತ್ತಯ್ಯನು ರಟ್ಟವಾಡಿಯ ದಂಡು ಬಂದಾಗ ಊರಿನ ನಾಶವನ್ನು ತಡೆಯಲು ಹೋರಾಡಿ ಸತ್ತು ಇಂದ್ರಲೋಕವನ್ನು ಸೇರಿದ. ಪೆರ್ಗುನ್ದಿ ಮತ್ತು ಅವನ ತಮ್ಮ ಕಿರ್ಗುನ್ದಿ ಸ್ಥಾಪಿಸಿದ ಕಲ್ಲು ಇದಾಗಿದೆ. |
ಈ ವೀರಗಲ್ಲು 'ಕಿತ್ತಯ್ಯ' ಎಂಬುವವನ ನೆನಪಿಗಾಗಿ ಗೌರವಾರ್ಥವಾಗಿ ಹಾಕಲಾಗಿದೆ. ಆತ 'ಪೆರ್ಬೊಳಲನಾಡು'-ಮೂವತ್ತರ ನಿವಾಸಿಯಾಗಿದ್ದು ರಟ್ಟವಾಡಿ (ರಾಷ್ಟ್ರಕೂಟ) ಸೈನ್ಯದ ಧಾಳಿಯ ವಿರುದ್ಧ ಹೋರಾಡಿ ಮರಣಹೊಂದಿದವನು. ಆ ದಾಳಿಯು ಪೆರ್ಬೊಳ ಊರನ್ನು ನಾಶಮಾಡಲು ಮಾಡಿದ ದಾಳಿಯಾಗಿತ್ತು. ಆ ಸಮಯದಲ್ಲಿ 'ಪೆಳ್ನಾಗತ್ತರ'ನು ಪೆರ್ಬೊಳಲನಾಡಿನ ಮುಖ್ಯಸ್ಥನಾಗಿದ್ದನು ಮತ್ತು 'ಶ್ರೀಪುರುಷ'ನು ದೊರೆಯಾಗಿದ್ದನು. ಇದರಲ್ಲಿ 'ಮೂವತ್ತು' ಎಂಬ ಸಂಖ್ಯೆಯು ಗಂಗ ಸಾಮ್ರಾಜ್ಯದಲ್ಲಿ ಮೂವತ್ತು ಊರುಗಳ ಅಡಳಿತ ಮುಖ್ಯಕೇಂದ್ರವಾಗಿ ಪೆರ್ಬೊಳನಾಡು ಇರುವುದನ್ನು ಸೂಚಿಸುತ್ತದೆ. |
ಗಂಗರ ಶ್ರೀಪುರುಷನು ಕ್ರಿ.ಶ ೭೨೬-೭೮೮ರ ನಡುವೆ ರಾಜ್ಯವಾಳಿದ ಗಂಗ ಸಾಮ್ರಾಜ್ಯದ ಶಕ್ತಿಶಾಲಿ ದೊರೆ. ಪಶ್ಚಿಮ ಗಂಗ ಸಾಮ್ರಾಜ್ಯವು ಕ್ರಿಶ ೪೦೦ ರಿಂದ ೧೦೦೦ ನೇ ಇಸವಿಯವರೆಗೆ ದಕ್ಷಿಣ ಭಾರತದಲ್ಲಿ ಒಂದು ಶಕ್ತಿಶಾಲಿ ಸಾಮ್ರಾಜ್ಯವಾಗಿತ್ತು. ಶ್ರೀಪುರುಷನ ರಾಜ್ಯವು ಗಂಗವಾಡಿ[೫] ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು ಮತ್ತು ಈಗಿನ ಕೋಲಾರ, ಬೆಂಗಳೂರು, ಕೃಷ್ಣಗಿರಿ, ಸೇಲಂ, ಈರೋಡು, ಮಂಡ್ಯ, ಮೈಸೂರು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳ ಪ್ರದೇಶಗಳಲ್ಲಿ ಹರಡಿತ್ತು. ಈ ಪ್ರದೇಶಗಳಲ್ಲಿ ದೊರೆತ ಆ ಕಾಲದ ಅನೇಕ ವೀರಗಲ್ಲುಗಳು ಆ ಕಾಲದಲ್ಲಿ ಗಂಗ ಮತ್ತು ರಾಷ್ಟ್ರಕೂಟರ ನಡುವೆ ನಡೆದ ಹಲವು ಕಾಳಗಗಳ ಬಗ್ಗೆ ಮಾಹಿತಿ ಒದಗಿಸುತ್ತವೆ.[೬] |
ಹೆಬ್ಬಾಳ ಪ್ರದೇಶದ ಹೆಸರಿನ ಪದ ವ್ಯುತ್ಪತ್ತಿ |
ಬದಲಾಯಿಸಿ |
ಹೆಬ್ಬಾಳ ಎಂಬ ಪದದ ವ್ಯುತ್ಪತ್ತಿ ಈ ಕೆಳಕಂಡಂತಿದೆ. |
ಹಳೆಗನ್ನಡದಲ್ಲಿ ಇದು ಪಿರಿಯ (ಹಿರಿಯ) + ಪೊಱಲ್ (ಪಟ್ಟಣ) ಎಂದಾಗುತ್ತದೆ.[೭] |
ಪಿರಿಯ + ಪೊೞಲ್ = ಪೆರ್ಬೊೞಲ್ > ಪೆರ್ವ್ವೊೞಲ್ > ಪೆರ್ಬ್ಬೊೞಲ್ > ಪೆರ್ಬ್ಬೊಳ್ > ಪೆಬ್ಬೊಳ್ > ಪೆಬ್ಬಾಳ > ಹೆಬ್ಬಾಳ |
೯ರಿಂದ ೧೧ ನೇ ಶತಮಾನದ ಅವಧಿಯಲ್ಲಿ ‘ಪ’ ಅಕ್ಷರದಿಂದ ಶುರುವಾಗುವ ಕನ್ನಡ ಪದಗಳಲ್ಲಿ ‘ಪ’ ಅಕ್ಷದ ಬದಲು ‘ಹ’ ಅಕ್ಷರವು ಬಳಕೆಗೆ ಬಂತು. (ಉದಾ: ಪುಲಿ -> ಹುಲಿ, ಪಾಲು -> ಹಾಲು). ಅದೇ ತರಹ ‘ವ’ ಅಕ್ಷರವು ‘ಬ’ ಆಯಿತು. ಕಾಲಕ್ರಮೇಣ ‘ಪೆರ್ಬೊಳಲ್’ ಎಂಬುದು ‘ಹೆಬ್ಬಾಳ’ ಆಯಿತು. |
ಈ ಶಿಲಾಬರಹದ ಪ್ರಾಮುಖ್ಯತೆ |
ಬದಲಾಯಿಸಿ |
ಬೆಂಗಳೂರಲ್ಲಿ ಈವರೆಗೂ ದೊರೆತಿರುವ ಸುಸ್ಥಿತಿಯಲ್ಲಿರುವ ಕನ್ನಡ ಶಿಲಾಬರಹಗಳಲ್ಲಿ ಇದು ಅತ್ಯಂತ ಹಳೆಯಕಾಲದ್ದಾಗಿದೆ. ಕನ್ನಡದಲ್ಲಿ ದೊರೆಕಿರುವ ಅತ್ಯಂತ ಹಳೆಯ ಬರೆವಣಿಗೆ ಕೃತಿಯಾದ ‘ಕವಿರಾಜಮಾರ್ಗ’ಕ್ಕಿಂತ ಇದು ಸುಮಾರು ೧೦೦ ವರ್ಷಗಳ ಹಿಂದಿನ ಕಾಲದ್ದಾಗಿದ್ದು ಲಿಪಿಯ ರೂಪ ಆಕಾರಗಳ ಬೆಳವಣಿಗೆ/ಬದಲಾವಣೆ ಬಗ್ಗೆ ಮಾಹಿತಿ ಒದಗಿಸುತ್ತದೆ. |
ಈ ಶಿಲಾಬರಹದಲ್ಲಿ ಉಲ್ಲೇಖಿಸಿರುವಂತೆ ‘ಕಿತ್ತಯ್ಯ’ ಎಂಬ ವ್ಯಕ್ತಿಯು ಈಗಿನ ಬೆಂಗಳೂರು ಪ್ರದೇಶದಲ್ಲಿ ಮೊತ್ತಮೊದಲ ದಾಖಲಾಗಿರುವ ನಾಗರೀಕನೊಬ್ಬನ ಹೆಸರಾಗಿದೆ. ಹಾಗಾಗಿ ಈತ ಬೆಂಗಳೂರಿನ ಮೊದಲ ದಾಖಲಿತ ನಾಗರೀಕನೆಂದು ಇತಿಹಾಸಕಾರರಿಗೆ ಪ್ರಿಯವಾಗಿದ್ದಾನೆ.[೮]. |
ಸಮುದಾಯದಿಂದ ಧನಸಂಗ್ರಹಿಸಿ ನಿರ್ಮಿಸಿದ ಮಂಟಪ |
ಬದಲಾಯಿಸಿ |
ಗಂಗಶೈಲಿಯ ಮಂಟಪದಲ್ಲಿ ವೀರಗಲ್ಲು |
ಎಪಿಗ್ರಾಫಿಯ ಕರ್ನಾಟಿಕ ಗ್ರಂಥದ ೯ನೇ ಸಂಪುಟ, ೧೯೦೫ ನೇ ಇಸವಿಯ ಆವೃತ್ತಿಯಲ್ಲಿ ಬೆಂಗಳೂರು ಪ್ರದೇಶದ ಸುಮಾರು ೧೬೦ಕ್ಕೂ ಹೆಚ್ಚು ಶಿಲಾಶಾಸನ/ಬರಹಗಳು ದಾಖಲಾಗಿವೆ. ಆದರೆ ಪ್ರಸ್ತುತ ಅವುಗಳಲ್ಲಿ ಕೇವಲ ೫೦ ಮಾತ್ರ ಉಳಿದುಕೊಂಡಿವೆ. ಇಂತಹ ಸಂದರ್ಭದಲ್ಲಿ ದೊರೆತ ಎಂಟನೇ ಶತಮಾನದ ಈ ಶಿಲಾಬರಹವು ಅತ್ಯಂತ ಮಹತ್ವದಾಗಿದೆ. ಹಾಗಾಗಿ ಇಂತಹ ಶಾಸನ/ಬರಹಗಳ ಸಂರಕ್ಷಣೆಯಲ್ಲಿ ಮತ್ತು ದಾಖಲಾತಿಯಲ್ಲಿ ತೊಡಗಿರುವ “Inscription Stones of Bangalore” ಎಂಬ ಸಮುದಾಯವು ಈ ಕಿತ್ತಯ್ಯ ಶಿಲಾಬರಹವನ್ನು ಸೂಕ್ತವಾಗಿ ಪ್ರತಿಷ್ಠಾಪಿಸಿ ಕಾಪಾಡುವ ಉದ್ದೇಶದಿಂದ ಇದಕ್ಕಾಗಿ ಗಂಗ ಶೈಲಿಯ ಮಂಟಪವೊಂದನ್ನು ನಿರ್ಮಿಸುವ ಯೋಜನೆ ಹಾಕಿತು. ವಾಸ್ತುಶಿಲ್ಪಿ ಯಶಸ್ವಿನಿ ಶರ್ಮಾ ಅವರು ಗಂಗ ಶೈಲಿಯ ಮಂಟಪದ ವಿನ್ಯಾಸ ಮಾಡಿದರು[೯]. ನಿರ್ಮಾಣಕ್ಕಾಗಿ ಜನರಿಂದಲೇ ಹಣಸಂಗ್ರಹ ಮಾಡುವ ಕೆಲಸಮಾಡಲಾಯಿತು. ಜನವರಿ ೨೦೨೦ರಲ್ಲಿ ಈ ಮಂಟಪದ ನಿರ್ಮಾಣಕಾರ್ಯ ಪೂರ್ಣಗೊಂಡಿತು.[೧೦] ಹೆಬ್ಬಾಳದ ನಾಗರೀಕರು ಜನವರಿ ೧೪, ೨೦೨೦ರ ಸಂಕ್ರಾಂತಿಯಂದು ಇದನ್ನು ಅಧಿಕೃತವಾಗಿ ಉದ್ಘಾಟನೆಗೊಳಿಸಿದರು ಮತ್ತು ಆ ಸ್ಥಳದಲ್ಲಿ ಹಬ್ಬದ ಆಚರಣೆಮಾಡಿ ಸಂಭ್ರಮಿಸಿದರು. |
ಉಲ್ಲೇಖಗಳು |
ಬದಲಾಯಿಸಿ |
"ಹೆಬ್ಬಾಳದಲ್ಲಿ 17ನೇ ಶತಮಾನದ ಶಿಲಾಶಾಸನ ಪತ್ತೆ". ವಿಜಯ ಕರ್ನಾಟಕ. June 8, 2018. Retrieved June 4, 2020. {{cite news}}: Cite has empty unknown parameter: |dead-url= (help) |
Hebbal Kittaya, Inscription found in Ditch (16 ಜನವರಿ 2019). "A crowd-funded memorial for Bengaluru's 'first citizen'". No. citizenmatters.in. citizenmatters.in. |
ಸಂಪತ್, ಎಸ್. (October 9, 2018). "ಶಾಸನಗಳ ಪ್ರತಿಕೃತಿ ಬೇಕೆ". ಪ್ರಜಾವಾಣಿ. {{cite news}}: Cite has empty unknown parameter: |dead-url= (help) |
ಕೃಷ್ಣಮೂರ್ತಿ ಪಿ.ವಿ. (2018). "<ಗಂಗ ಶ್ರೀಪುರುಷನ ಹೆಬ್ಬಾಳದ ಅಪ್ರಕಟಿತ ವೀರಗಲ್ಲು ಶಾಸನ>" (PDF). ಇತಿಹಾಸ ದರ್ಪಣ. 37–38: 177–182. |
The Ganga’s of Talakad by V Krishna Rao 1936, p. 139 & 305 |
ಕೆ. ಎಸ್, ಶಿವಣ್ಣ (1977). Rashtrakuta Relations with the Gangas of Talakad. ಮೈಸೂರು: ಮೈಸೂರು ವಿ.ವಿ. ಪ್ರಸಾರಾಂಗ. |
ಕನ್ನಡ ಸಾಹಿತ್ಯ ಪರಿಷತ್ ನಿಘಂಟು 1970, p. 5836 |
"Crowdfunded memorial for Bengaluru's oldest citizen is ready". No. timesofindia.indiatimes.com. timesofindia.indiatimes.com. 14 ಜನವರಿ 2019. |
ಎಸ್, ಸಂಪತ್ (August 7, 2018). "ಶಾಸನಗಳ ಹುಡುಕುತ್ತಾ..." ಪ್ರಜಾವಾಣಿ ವಾರ್ತೆ. {{cite news}}: Cite has empty unknown parameter: |dead-url= (help) |
Hebbal, Inscription (23 ಜೂನ್ 2018). "Bengaluru's first known citizen finally gets a pavilion after 1,300 years of standing on the ground". No. bangaloremirror.indiatimes.com. bangaloremirror.indiatimes.com. |
ಹೊರಸಂಪರ್ಕಕೊಂಡಿಗಳು |
ಬದಲಾಯಿಸಿ |
ಕಲೆಕ್ಟರ್ ಎಡಿಷನ್ ಹೆಬ್ಬಾಳ ಶಾಸನ, ಉದಯವಾಣಿ |
Last edited ೨ years ago by Omshivaprakash |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಹೆಸರಘಟ್ಟ ಶಿಲಾಶಾಸನ |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ಹೆಸರಘಟ್ಟ ಶಿಲಾಶಾಸನವು ಬೆಂಗಳೂರಿನ ನೆಲಮಂಗಲ ಸಮೀಪದ ಚಂದ್ರಮೌಳೀಶ್ವರ ದೇವಾಲಯದ ಮುಂಬಾಗದಲ್ಲಿದೆ. ಈ ಶಾಸನ ಸುಮಾರು ಕ್ರಿ.ಶ ೧೫೩೩ರಲ್ಲಿ ಸ್ಥಾಪನೆಯಾಗಿದೆ. ಇದರ ಗಾತ್ರ 3ft. ಇದು ಕನ್ನಡ ಲಿಪಿಯಲ್ಲಿ ಇದೆ. ಇದು ವಿಜಯನಗರ ಸಾಮ್ರಾಜ್ಯದ ಕಾಲದ್ದಾಗಿದೆ. |
ಹೆಸರಘಟ್ಟ ಶಿಲಾಸನ |
ಹೆಸರಘಟ್ಟ ಶಿಲಾಶಾಸನ |
ಸ್ಥಳ |
ಹೆಸರಘಟ್ಟ |
ಎತ್ತರ |
3 feet (0.91 m) |
ನಿರ್ಮಾಣ |
CE1533 |
MapWikimedia | © OpenStreetMap |
ಹೆಸರಘಟ್ಟ ಶಿಲಾಶಾಸನ |
ಪರಿವಿಡಿ |
ಶಾಸನ ಪಠ್ಯ |
ಬದಲಾಯಿಸಿ |
ಎಪಿಗ್ರಾಫಿಯ ಕರ್ನಾಟಿಕದ ಒಂಭತ್ತನೇ ಸಂಪುಟದಲ್ಲಿ ಈ ಶಾಸನವು NL31 ಸಂಖ್ಯೆಯಡಿ ದಾಖಲಾಗಿರುವ ಪಠ್ಯ ಈ ರೀತಿ ಇದೆ. [೧] |
ಅದೇ ಹೋಬಳಿ ಹೆಸರಘಟ್ಟ ಚಂದ್ರಮೌಳೀಶ್ವರ ದೇವಾಲಯದ ಬಲಗಡೆ ಗೋಡೆಯ ಮೇಲೆ. |
ಅರ್ಥ |
ಬದಲಾಯಿಸಿ |
ಉಲ್ಲೇಖಗಳು |
ಬದಲಾಯಿಸಿ |
Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology. |
ಹೊರಕೊಂಡಿಗಳು |
ಬದಲಾಯಿಸಿ |
ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ |
RELATED PAGES |
ಕನ್ನೇಲಿ ಶಿಲಾಶಾಸನ |
ಸೋಮೇಶ್ವರ ದೇವಸ್ಥಾನ ಬೇಲೂರು ಶಿಲಾಶಾಸನ |
Subsets and Splits
No saved queries yet
Save your SQL queries to embed, download, and access them later. Queries will appear here once saved.