text
stringlengths
0
2.67k
Sir Alan Lascelles, Duff Hart-Davis (2006). King's counsellor: abdication and war : the diaries of Sir Alan Lascelles. Weidenfeld & Nicolson. p. 142. ISBN 978-0-297-85155-4.
ಉಲ್ಲೇಖಗಳು
ಬದಲಾಯಿಸಿ
Ralhan, O. P. (2002). Encyclopaedia of Political Parties. Anmol Publications PVT. LTD. ISBN 978-81-7488-865-5.
ಟೆಂಪ್ಲೇಟು:Padma Vibhushan Awards
Last edited ೨ months ago by Mahaveer Indra
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಮಿರ್ಜಾ ಇಸ್ಮಾಯಿಲ್
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಮಿರ್ಜಾ ಇಸ್ಮಾಯಿಲ್ (೧೮೮೩ - ಜನವರಿ ೮, ೧೯೫೯) ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ, ಮೈಸೂರಿನ ದಿವಾನರಾಗಿದ್ದರು. ಕಾಗದದ ಕಾರ್ಖಾನೆ, ಸಕ್ಕರೆ ಕಾರ್ಖಾನೆ, ಮೊದಲಾದ ಕಾರ್ಖಾನೆಗಳನ್ನು ಸ್ಥಾಪಿಸಲು ಕಾರಣಕರ್ತರಾದವರು. ವೃಂದಾವನ ಉದ್ಯಾನವನ್ನು ನಿರ್ಮಿಸಿದವರು ಮಿರ್ಜಾರವರು. ಸಂಸ್ಥಾನದ ಸಮೃದ್ಧಿ ಮತ್ತು ಸೊಬಗುಗಳಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಅವರು ಹಿಂದೂ ಮುಸ್ಲಿಮ್ ಸೌಹಾರ್ದತೆಗೂ ಕಾರಣರಾಗಿದ್ದರು[೧].
ದಿವಾನ್ ಮಿರ್ಜಾ ಇಸ್ಮಾಯಿಲ್
ಪರಿವಿಡಿ
ಬಾಲ್ಯ ಮತ್ತು ವಿದ್ಯಾಭ್ಯಾಸ
ಬದಲಾಯಿಸಿ
ಇವರು ಪರ್ಷಿಯಾದ ಒಬ್ಬ ಶ್ರೀಮಂತ ಮನೆತನದಿಂದ ಬಂದಿದ್ದವರು . ಆಲಿ ಅಸ್ಗರ್, ಅವರ ಅಜ್ಜ. ತಮ್ಮ ೧೬ ನೆಯ ವಯಸ್ಸಿನಲ್ಲೇ ಬೆಂಗಳೂರಿಗೆ ಬಂದಿದ್ದರು. ಓದು ಬರಹ ಬರದಿದ್ದರೂ, ವ್ಯಾಪಾರದಲ್ಲಿ ನಿಪುಣರು, ಬುದ್ಧಿವಂತರು ಮತ್ತು ನಂಬಿಕೆಗೆ ಅರ್ಹರು. ಮಹಾರಾಜರ ವಿಶ್ವಾಸ ಮತ್ತು ನಂಬಿಕೆಯನ್ನು ಸಂಪಾದಿಸಿದರು. ಈಗಲೂ ಅವರ ಹೆಸರಿನ ರಸ್ತೆ ಬೆಂಗಳೂರಿನಲ್ಲಿದೆ. ಮಿರ್ಜಾರವರ ತಂದೆ ಆಗಾಖಾನ್, ಚಾಮರಾಜ ಒಡೆಯರ, ಅಂಗರಕ್ಷಕರಾಗಿದ್ದರು. ಈ ಮನೆತನ ಹೀಗೆ, ಮಹಾರಾಜರ ವಿಶ್ವಾಸ, ನಂಬಿಕೆಗೆ ಅರ್ಹರಾದರು[೨].
ಮಿರ್ಜಾ ಇಸ್ಮಾಯಿಲ್‍ರು ೧೮೮೩ ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಸೆಂಟ್ ಪ್ಯಾಟ್ರಿಕ್ ಸ್ಕೂಲ್, ಮತ್ತು ವೆಸ್ಲಿಯನ್ ಮಿಶನ್ ಹೈಸ್ಕೂಲ್ ನಲ್ಲಿ, ವಿಧ್ಯಾಭ್ಯಾಸ. ಚಾಮರಾಜ ಒಡೆಯರು ೧೮೯೪ ರಲ್ಲಿ, ತೀರಿಕೊಂಡರು. ಅವರ ಹಿರಿಯ ಮಗ, ಕೃಷ್ಣರಾಜ ಒಡೆಯರಿಗೆ ಕೇವಲ ೧೦ ವರ್ಷವಯಸ್ಸು. ಅರಮನೆಯ, "ರಾಯಲ್ ಸ್ಕೂಲ್," ನಲ್ಲಿ ಅವರ ವಿದ್ಯಾಭ್ಯಾಸ ನಡೆಯಿತು. ಒಟ್ಟು ೯ ಜನ ವಿದ್ಯಾರ್ಥಿಗಳಿದ್ದ ಆ ವಿಶೇಷ ಶಾಲೆಯಲ್ಲಿ, ಮಹಾರಾಜರ ಜೊತೆಯಲ್ಲಿಯೆ ಮಿರ್ಜಾರವರು ಓದುತ್ತಿದ್ದರು.
೧೯೦೧ರಲ್ಲಿ, ಮಿರ್ಜಾ, ಬೆಂಗಳೂರಿನ ಸೆಂಟ್ರೆಲ್ ಕಾಲೇಜಿಗೆ ಸೇರಿದರು. ಅವರು ಆರಿಸಿಕೊಂಡ ವಿಷಯ ಭೂವಿಜ್ಞಾನ. ಮಿರ್ಜಾ, ಶಿಸ್ತಿನ ವಿದ್ಯಾರ್ಥಿ. ತಮ್ಮ ವಿದ್ಯಾಭ್ಯಾಸ ಮುಗಿದ ನಂತರವೂ ಗುರುಗಳನ್ನು ಕಂಡಾಗಲೆಲ್ಲಾ ನಮಸ್ಕರಿಸುತ್ತಿದ್ದರು. ೧೯೦೫ ರಲ್ಲಿ ಪದವಿ ಮುಗಿಸಿದರು. ಅವರಿಗೆ ಸಿಕ್ಕಿದ್ದು ಪೋಲೀಸ್ ಕೆಲಸ. ಮಹಾರಾಜರು ಮಿರ್ಜಾಇಸ್ಮಾಯಿಲ್ ರವರನ್ನು, ಡೆಪ್ಯುಟಿ ಕಾರ್ಯದರ್ಶಿಯಾಗಿ ನೇಮಿಸಿಕೊಂಡರು.
ಆಗಿನ ಬ್ರಿಟಿಷ್ ರೆಡೇಂಟ್ ಗಳು ಸರ್ವಾಧಿಕಾರಿಗಳಾಗಿದ್ದು, ತಮಗೆ ಬೇಕಾದ ಕೆಲವರನ್ನು ಸೇರಿಸಿಕೊಳ್ಳಿ ಎಂದು ಒತ್ತಾಯಿಸುತ್ತಿದ್ದರು. ಆಪ್ತ-ಕಾರ್ಯದರ್ಶಿಯ ಸ್ಥಾನಕ್ಕೆ ಒಬ್ಬ ಬ್ರಿಟಿಷ್ ಅಧಿಕಾರಿಯಿದ್ದನು. ಸ್ಥಳೀಯ ಜನರಿಗೆ ಸಹಾಯವಾಗುವಂತೆ, ಹುಜೂರ್ ಕಾರ್ಯದರ್ಶಿ ಎನ್ನುವ ಒಂದು ಹೊಸ ಹುದ್ದೆಯ ನಿರ್ಮಾಣವಾಯಿತು.
ಹುಜೂರ್ ಕಾರ್ಯದರ್ಶಿಯಿಂದ, ಮೈಸೂರಿನ ದಿವಾನರಾಗಿ
ಬದಲಾಯಿಸಿ
೧೯೧೩ ರಲ್ಲಿ ಅದು ತೆರವಾದಾಗ, ಮಹಾರಾಜರು ಮಿರ್ಜಾರವರಿಗೆ ಕರೆ ಕಳಿಸಿ ಸೇರಿಸಿ ಕೊಂಡರು. ಮಹಾರಾಜರ ಬಳಿ ಅಧಿಕಾರಕ್ಕಿದ್ದವರು ೩ ಜನ. ದಿವಾನರು ಮತ್ತಿಬ್ಬರು ಪರ್ಸನಲ್ ಸೆಕ್ರೆಟರಿ, ಹೆಚ್ಚು ಕಡಿಮೆ ದಿವಾನರಷ್ಟೇ ಮುಖ್ಯರಾದವರು. ಮಿರ್ಜಾರವರ ಬುದ್ಧಿ ಮತ್ತು ಅಲ್ಲಿನ ದೇಸಿ ಜನರ ಮಧ್ಯೆ, ಅವರು ಒಳ್ಳೆಯ ಸಂಪರ್ಕ ಇಟ್ಟುಕೊಂಡಿದ್ದರಿಂದ ಪರಂಗಿ ಅಧಿಕಾರಿಗಳಿಗೆ ಸ್ಥಳೀಯ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಎಲ್ಲಕ್ಕೂ ಮಿರ್ಜರವರನ್ನು, ವಿಚಾರಿಸುತ್ತಿದ್ದರು. ೧೯ ವರ್ಷ ಉಪಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ೧೯೨೯ರಲ್ಲಿ ಅವರನ್ನು ದಿವಾನರನ್ನಾಗಿ ನೇಮಿಸಲಾಯಿತು. ರಾಜಾಶ್ರಯದಲ್ಲಿ ಒಟ್ಟು ೪೩ ವರ್ಷ ಕೆಲಸಮಾಡಿದರು. ೧೯೪೧ ರಲ್ಲಿ 'ಸಮರ್ಥ ದಿವಾನ'ರೆಂಬ ಹೆಸರು ಬಂತು.
ಅನೇಕ ಜನ-ಹಿತ ಕಾರ್ಯಕ್ರಮಗಳ ರುವಾರಿಯಾಗಿ
ಬದಲಾಯಿಸಿ
೧೯೧೮ ರವರೆಗೆ, ದಿವಾನ್ ಸರ್. ಎಂ. ವಿಶ್ವೇಶ್ವರಯ್ಯನವರ ಕಾಲದಲ್ಲಿ ಮೈಸೂರು ರಾಜ್ಯ, ಆಧುನಿಕತೆಯ ಕಡೆಗೆ ದಾಪುಗಾಲು ಹಾಕುತ್ತಾ ನಡೆದಿತ್ತು. ಮಿರ್ಜಾ ಇಸ್ಮಾಯಿಲ್ ರವರು ಅದನ್ನು ಮುಂದುವರೆಸಿಕೊಂಡು ಹೋದರು. ಮಂಡ್ಯದ ಸಕ್ಕರೆ ಕಾರ್ಖಾನೆ, ಭದ್ರಾವತಿಯ ಕಬ್ಬಿಣದ ಕಾರ್ಖಾನೆ ಮತ್ತು ಕಾಗದದ ಕಾರ್ಖಾನೆಗಳನ್ನು ಪ್ರಾರಂಭಿಸಿದರು. ದಿನನಿತ್ಯದ ಬಳಕೆಗೆ ಬರುವ ಸಿಮೆಂಟ್, ರಾಸಾಯನಿಕ ಗೊಬ್ಬರ, ಗಾಜು, ಪಿಂಗಾಣಿ ಪದಾರ್ಥಗಳು ಇತ್ಯಾದಿ. ಕೃತಕ ರೇಷ್ಮೆ, ವಿದ್ಯುತ್ ಬಲ್ಬುಗಳ ಉದ್ಯಮಗಳು. ಎಚ್. ಎ. ಎಲ್ ಕಾರ್ಖಾನೆಯ ಸ್ಥಾಪನೆ. ಭಾರತದ ೬೦% ಕಾಫಿ ಬೆಳೆ, ಮೈಸೂರಿನಲ್ಲಿ ಬೆಳೆದರೂ, ಪರಿಷ್ಕರಿಸಲು ಹೊರ ರಾಜ್ಯಕ್ಕೆ ಕಳಿಸಬೇಕಾಗಿತ್ತು.
ಅದನ್ನು ತಪ್ಪಿಸಿ ಇಸ್ಮಾಯಿಲ್ ರವರು, "ದ ಮೈಸೂರ್ ಕಾಫಿ ಕ್ಯೂರಿಂಗ್ ವರ್ಕ್ಸ್,"ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರಿಂದ, ಸ್ಥಳೀಯರಿಗೆ ಅನುಕೂಲವಾಯಿತು. ಕಾರ್ಖಾನೆಗಳನ್ನೆಲ್ಲಾ, ಒಂದೇ ಕಡೆ ಕೆಂದ್ರೀಕರಿಸಿ ಪರಿಸರದ ಮೇಲೆ ಒತ್ತಡ ಹೇರುವ ಬದಲಾಗಿ, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸ್ಥಾಪಿಸಿದರು.ಇದು ಒಂದು ಉತ್ತಮ ಪ್ರಯತ್ನ. ಶಿವನ ಸಮುದ್ರದಲ್ಲಿ ವಿದ್ಯುತ್ ಆಗಲೇ ಒದಗುತ್ತಿತ್ತು. ಶಿಂಷಾ ಮತ್ತು ಜೋಗ್ ಜಲಪಾತಗಳ ನೀರನ್ನೂ ಉಪಯೋಗಿಸಿಕೊಂಡು, ವಿದ್ಯುತ್ ಉತ್ಪಾದನೆ ಪ್ರಾರಂಭಿಸಿದರು.
ಶಿವನಸಮುದ್ರ ವಿದ್ಯುತ್ ಕೇಂದ್ರಕ್ಕೆ ಸಿಡಿಲು ಹೊಡೆದು ಕೆಲ ಕಾಲ ಕಾರ್ಯ ನಿಷ್ಕ್ರಿಯಗೊಂಡಿತ್ತು. ೧೯೨೬ ರಲ್ಲಿ ಬೆಂಗಳೂರು, ಮೈಸೂರು ಮತ್ತು ಕೋಲಾರಗಳಿಗೆ ವಿದ್ಯುತ್ ಪೂರೈಕೆಯಾಯಿತು. ೧೯೪೦ ರಲ್ಲಿ ಮೈಸೂರು ರಾಜ್ಯದ ಸುಮಾರು ೧೮೦ ಹಳ್ಳಿಗಳಿಗೂ ವಿದ್ಯುತ್ ಸರಬರಾಜು ಮಾಡಲಾಯಿತು. ಪ್ರತಿಯೊಂದು ಹಳ್ಳಿಯ ಪ್ರಮುಖ ದ್ವಾರವನ್ನು ಸುಂದರವಾಗಿ ಕಟ್ಟಲಾಯಿತು. ಚೊಕ್ಕಟ, ಅಂದಕ್ಕೆ, ಪ್ರಾತಿನಿಧ್ಯ. ಸಾರ್ವಜನಿಕ ಉದ್ಯಾನ, ಕಾರಂಜಿ, ನಗರಸಭಾ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ, ಆಟದ ಮೈದಾನ, ಊರಿನ ದೊಡ್ಡಮೈದಾನ, ಇದು ಮಿರ್ಜಾರವರ ಕಲ್ಪನೆ. ಇದನ್ನು ಬಹುತೇಕ ಸಾಕಾರಗೊಳಿಸಿದರು ಕೂಡ. ವೃಂದಾವನ ಉದ್ಯಾನವನದ ಅಂದ-ಚೆಂದಕ್ಕೂ ಅವರು ಬಹಳವಾಗಿ ಶ್ರಮಿಸಿದರು.
ಬೆಂಗಳೂರಿನಲ್ಲಿ ಸ್ಥಾಪಿಸಿದ್ದ, ಮಾನಸಿಕ ರೋಗಿಗಳ ಅಸ್ಪತ್ರೆಯ ಹೊರ -ಪರಿಸರವನ್ನು ಅತ್ಯಂತ ಎಚ್ಚರಿಕೆ ವಹಿಸಿ, ಅದರ ವನಸಂಪತ್ತನ್ನು ಹೆಚ್ಚಿಸಿದರು. ಎಲ್ಲರೂ ಆಸ್ಪತ್ರೆಯ ಪರಿಸರವನ್ನು, ವಿಹಾರ ಸ್ಥಳಕ್ಕೆ ಹೋಲಿಸುತ್ತಾರೆ. ರೋಗಿಗಳ ಮನಸ್ಸನ್ನು ಉಲ್ಲಾಸಗೊಳಿಸಿ ಕ್ಷಣಕಾಲವಾದರು ಅವರ ಉದ್ವಿಜ್ಞತೆಯನ್ನು ಕಡಿಮೆ ಮಾಡುವ ವಿಚಾರ ಮಿರ್ಜಾರವರದು. ೧೯೪೦ ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣವನ್ನು ಪ್ರಾರಂಭಿಸಿದರು. ಅದಕ್ಕೆ ತಗುಲಿದ ಖರ್ಚು ೧ ಲಕ್ಷ ೩೦ ಸಾವಿರ ರೂಪಾಯಿಗಳು.
ಅಂಜೂರದ ಹಣ್ಣುಗಳು ಮೈಸೂರಿನ ಶ್ರೀರಂಗಪಟ್ಟಣದ ಬಳಿಯ ಗಂಜಾಂ ಎಂಬ ಹಳ್ಳಿಯಲ್ಲಿ, ಸುಮಾರು ೨೦೦ ವರ್ಷಗಳಿಂದ ಬೆಳೆಯುತ್ತಿದ್ದು, ಮಲೇರಿಯ ಬಂದು ಆ ಪ್ರದೇಶದ ಜನರಿಗೆ ತೊಂದರೆಯಾಯಿತು. ಕಾಲುವೆಯ ನೀರು ಕೆಳಮಟ್ಟದಲ್ಲಿ ಹರಿಯುತ್ತಿತ್ತು. ಹೊಲ ತೋಟಗಳು ಸ್ವಲ್ಪ ಎತ್ತರದಲ್ಲಿದ್ದು ಹೊಲಗಳಿಗೆ ನೀರು ಎತ್ತಿ ಹರಿಸುವುದು ಕಷ್ಟವಾಗಿತ್ತು. ಇದನ್ನು ಗಮನಿಸಿದ ಮಿರ್ಜಾರವರು, ಕೂಡಲೇ ನೀರೆತ್ತುವ ಪಂಪ್ ಗಳನ್ನು ತರಿಸಿ ಹಳ್ಳಿಯ ರೈತರಿಗೆ ಕೊಟ್ಟು, ಅವರ ಬೆಳೆಯನ್ನು ಕಾಪಾಡಿದರು. ಇದರಿಂದ ರೈತರ ಜೀವನದಲ್ಲಿ ಹೊಸ ಆಶಾಕಿರಣ ಬಂದಂತಾಯಿತು.
ಬೆಂಗಳೂರಿಗೆ ಕುಡಿಯುವ ನೀರನ್ನು ಸರಬರಾಜುಮಾಡಲು, ಹೇಸರಘಟ್ಟದಿಂದ ಬ್ರಿಟಿಷ್ ರೆಸಿಡೆಂಟರು ಸಲಹೆ ಮಾಡಿದಾಗ ಇಸ್ಮಾಯಿಲ್ ರು ಒಂದು ಸಮಿತಿಯನ್ನು ರಚಿಸಿ, ಅದರ ಪ್ರಕಾರ ಬೆಂಗಳೂರಿಗೆ ೨೨ ಮೈಲಿ ದೂರದಲ್ಲಿದ್ದ ಚಾಮರಾಜ ಜಲಾಶಯದ ನೀರನ್ನು ಬೆಂಗಳೂರಿಗೆ ತಂದರು. ೪ ಕೋಟಿ ಲೀ/ಪ್ರತಿದಿನ. ಮಂಡ್ಯದ ಬಳಿಯ ಇರ್ವಿನ್ ಕಾಲುವೆ (ವಿಶ್ವೇಶ್ವರಯ್ಯ ಕಾಲುವೆ) ೨.೫೦ ಲಕ್ಷ ರೂಪಾಯಿನಲ್ಲಿ ಕಟ್ಟಿಸಿದರು. ಇದು ೨೫,೦೦೦ ಎಕರೆಗಳಿಗೆ ನೀರು ಒದಗಿಸುತ್ತಿದೆ. ಗಾಂಧಿಯವರು ಅನಾರೋಗ್ಯದಿಂದ ಬಳಲುತ್ತಿದ್ದು ಬೆಂಗಳೂರಿಗೆ ಬಂದಾಗ, ಕುಮಾರಕೃಪಕ್ಕೆ ಬಂದು ವಿಶ್ರಾಂತಿ ತೆಗೆದುಕೊಳ್ಳಲು ಮೈಸೂರಿನ ದೊರಗಳು ಆಹ್ವಾನಿಸಿದಾಗ ವೈಸ್ ರಾಯ್ ವೆಲಿಂಗ್ಡನ್ ರು, ಅಸಮಧಾನ ವ್ಯಕ್ತಪಡಿಸಿದ್ದರು.
ಆದರೆ, ಮಿರ್ಜಾರವರು ವಸತಿಯ ಅಗತ್ಯಗಳನ್ನು ವಿವರಿಸಿ, ಅದನ್ನು ಅನುಮೋದಿಸಿದ್ದರಿಂದ, ಗಾಂಧಿಯವರು ಬರಲು ಸಹಾಯವಾಯಿತು. ಬ್ರಿಟಿಷ್ ಸರಕಾರ ೧೮೮೧ ರಲ್ಲಿ, ರಾಜಪರಿವಾರಕ್ಕೆ ಮೈಸೂರನ್ನು ಬಿಟ್ಟುಕೊಟ್ಟಿತು. ಬದಲಾಗಿ, ೩೫ ಲಕ್ಷ ಬೇಡಿತು. ಅದರ ಬಗ್ಗೆ, ಪತ್ರ ವ್ಯವಹಾರ ಮಾಡಿ ಮಿರ್ಜಾರವರು ೧೯೨೮ ರಲ್ಲಿ ೧೦.೫೦ ಲಕ್ಷ ಕಡಿಮೆ ಮಾಡಿಕೊಳ್ಳಲು ರಾಜಿಮಾಡಿಸಿಕೊಟ್ಟರು. ಮೈಸೂರಿನಲ್ಲಿ ಮೆಡಿಕಲ್ ಕಾಲೇಜು, ೧೦೦ ಶಾಲೆಗಳು ಸ್ಥಾಪಿಸಲ್ಪಟ್ಟವು. ಅದರ ಜವಾಬ್ದಾರಿಯನ್ನು ಮಿರ್ಜಾ ಇಸ್ಮಾಯಿಲ್ ವಹಿಸಿಕೊಂಡಿದ್ದರು. ೧೯೪೦ ರಲ್ಲಿ ರಾಜರು ಮಡಿದರು. ಕೆಲವು ತಿಂಗಳಲ್ಲೇ ಮಿರ್ಜಾರವರು ತಮ್ಮ ಪದವಿಗೆ ರಾಜೀನಾಮೆ ಕೊಟ್ಟರು.
ಜೈಪುರ್ ಮತ್ತು ಹೈದರಾಬಾದ್
ಬದಲಾಯಿಸಿ
ಮೈಸೂರಿನಿಂದ ಅವರು ಜೈಪುರಕ್ಕೆ ೧೯೪೨ ರಲ್ಲಿ, ದಿವಾನರಾಗಿ ಹೋದರು. ಜೈಪುರದ ಪೂರ್ಣ ಮುಖವಾಡವನ್ನು ಬದಲಿಸಿದರು. ಅತ್ಯಂತ ಸುಂದರವಾಗಿ ಕಾಣಿಸುವಂತೆ ಮಾರ್ಪಟುಗಳನ್ನು ಮಾಡಿದರು. ಪಿಲಾನಿ ಶಿಕ್ಷಣಸಂಸ್ಥೆಯನ್ನು ಸ್ಥಾಪಿಸಿದರು. ರಾಜ್ ಪುಟಾನ ವಿಶ್ವವಿದ್ಯಾಲಯದ ಸ್ಥಾಪನೆ. ೧೯೪೬ ರಲ್ಲಿ ಹೈದರಾಬಾದ್ ನಿಜಾಮನ ಅರಮನೆಯಲ್ಲಿ ದಿವಾನರಾಗಿ ನೇಮಿಸಲ್ಪಟ್ಟರು.
ಅವರು ಮೇ ೧೯೪೬ ರಲ್ಲಿ ರಾಜೀನಾಮೆ ಕೊಟ್ಟರು. ಕಾಶ್ಮೀರದ ಮುಖ್ಯಮಂತ್ರಿಯಾಗಲು ಅವಕಾಶ ಬಂದಿತ್ತು. ವಿಶ್ವಸಂಸ್ಥೆಗೆ ದುಡಿದರು. ಇಂಡೋನೇಷಿಯದ ತಾಂತ್ರಿಕನೆರವಿಗೆ ಹೋದರು. ೧೯೫೨ ರಲ್ಲಿ ಮುಂದೆ, ಇರಾನ್ ಇರಾಕ್, ದೇಶಗಳನ್ನು ಭೇಟಿಮಾಡಿದರು. ೧೯೫೪ ರಲ್ಲಿ ತಮ್ಮ ಆತ್ಮಕಥೆಯನ್ನು ರಚಿಸಿದರು.
ಬೆಂಗಳೂರಿಗೆ ಮರಳಿದರು
ಬದಲಾಯಿಸಿ
ಹೈದರಾಬಾದಿನಿಂದ ಅವರ ಪ್ರಾಣಪ್ರಿಯವಾದ ನಗರ ಬೆಂಗಳೂರಿಗೆ ವಾಪಸ್ ಬಂದರು. ೧೯೫೯ ರಲ್ಲಿ ಮರಣ ಹೊಂದಿದರು. ಬೆಂಗಳೂರಿನಲ್ಲೇ ತಮ್ಮ ಅಂತ್ಯ ಮತ್ತು ಅಲ್ಲೆ ಸಮಾಧಿಯೂ ಆಗಬೇಕೆಂಬುದು ಅವರ ಅಂತಿಮ ಆಶೆಯಾಗಿತ್ತು. ಹಿರಿಯ ವ್ಯಕ್ತಿತ್ವ. ಅಪ್ರತಿಮ ಪ್ರತಿಭೆ, ತೆರೆದಮನಸ್ಸಿನ ಪರಿಶೀಲನೆ, ಭಿನ್ನಾಭಿಪ್ರಾಯಗಳನ್ನು ದಕ್ಷತೆಯಿಂದ ನಿವಾರಿಸುವ ರೀತಿ, ನಿರ್ಭೀತಿಯಿಂದ ತೆಗೆದುಕೊಳ್ಳುವ ತೀರ್ಮಾನಗಳು, ಅದ್ಭುತ ನೆನಪಿನಶಕ್ತಿ, ಆಡಳಿತದಲ್ಲಿ ಚಾಣಾಕ್ಷತನ, ಎಲ್ಲ ವರ್ಗದ ಜನರಲ್ಲೂ ಸ್ನೇಹದ ಒಡನಾಟ, ಇವೇ ಮೊದಲಾದವುಗಳು ಅವರನ್ನು ಯಶಸ್ಸಿನ ಶಿಖರಕ್ಕೆ ಒಯ್ದಿದ್ದವು.
ಬರೆದು ಪ್ರಕಟಿಸಿದ ಪುಸ್ತಕ
ಬದಲಾಯಿಸಿ
ಮೈ ಪಬ್ಲಿಕ್ ಲೈಫ್ (ನನ್ನ ಸಾರ್ವಜನಿಕ ಬದುಕು - ಕನ್ನಡಕ್ಕೆ ಡಾ. ಗಜಾನನ ಶರ್ಮ)
ಆಕರ
ಬದಲಾಯಿಸಿ
ಪ್ರೊ. ಶ್ರೀ ಎಲ್. ಎಸ್. ಶೇಷಗಿರಿಯರು ಬರೆದ, ಕಿರು ಹೊತ್ತಿಗೆ.
ಉಲ್ಲೇಖಗಳು
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಮೋಕ್ಷಗುಂಡಂ ವಿಶ್ವೇಶ್ವರಯ್ಯ
ಮೈಸೂರು ರಾಜ್ಯದ ದಿವಾನ್, ಭಾರತದ ವಿಜ್ಞಾನಿ
ಭಾಷೆ
Download PDF
ವೀಕ್ಷಿಸಿ
ಮೂಲವನ್ನು ನೋಡು
ಸರ್ ಎಂ.ವಿ (ಸೆಪ್ಟೆಂಬರ್ ೧೫, ೧೮೬೧ - ಏಪ್ರಿಲ್ ೧೨, ೧೯೬೨) ಎಂದು ಜನಪ್ರಿಯರಾಗಿದ್ದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ರವರು, ಭಾರತದ ಗಣ್ಯ ಅಭಿಯಂತರರಲ್ಲಿ ಒಬ್ಬರು. ಇವರು ೧೯೧೨ ರಿಂದ ೧೯೧೮ರವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದವರು. ಇವರ ಹುಟ್ಟಿದ ದಿನವನ್ನು ಭಾರತ ದೇಶದಾದ್ಯಂತ ಅಭಿಯಂತರ ದಿನ ಎಂದು ಆಚರಿಸುತ್ತಾರೆ.
ಮೋಕ್ಷಗುಂಡಂ ವಿಶ್ವೇಶ್ವರಯ್ಯ
ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯ
ಜನನ
ಏಪ್ರಿಲ್ ೧೪, ೧೯೬೨ (ವಯಸ್ಸು ೬೨)
ಮುದ್ದೇನಹಳ್month, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ, ಭಾರತ
ಮರಣ
New Delhi
ರಾಷ್ಟ್ರೀಯತೆ
AMERICA
ಶಿಕ್ಷಣ ಸಂಸ್ಥೆ
ಪುಣೆ ಸಿವಿಲ್ ಇಂಜಿನಿಯರಿಂಗ್ ಕಾಲೇಜ್
ವೃತ್ತಿ
ಇಂಜಿನಿಯರ್
ಪೋಷಕ(ರು)
ವೆಂಕಟ ಲಕ್ಷ್ಮಮ್ಮ(ತಾಯಿ)
ಶ್ರೀನಿವಾಸ ಶಾಸ್ತ್ರಿ (ತಂದೆ)
ಪರಿವಿಡಿ
ಬಾಲ್ಯ, ವಿದ್ಯಾಭ್ಯಾಸ
ವಿಶ್ವೇಶ್ವರಯ್ಯನವರು ಸೆಪ್ಟೆಂಬರ್ ೧೫,೧೮೬೦ ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಎಂಬಲ್ಲಿ ಜನಿಸಿದರು. ವಿಶ್ವೇಶ್ವರಯ್ಯನವರ ತಂದೆ 'ಶ್ರೀನಿವಾಸ ಶಾಸ್ತ್ರಿ', ತಾಯಿ 'ವೆಂಕಟಲಕ್ಷ್ಮಮ್ಮ'. ಅವರ ಪೂರ್ವಜರು ಈಗಿನ ಆಂಧ್ರಪ್ರದೇಶದ 'ಮೋಕ್ಷಗುಂಡಂ' ಎಂಬ ಸ್ಥಳದಿಂದ ವಲಸೆ ಬಂದು ಮುದ್ದೇನಹಳ್ಳಿಯಲ್ಲಿ ವಾಸವಾಗಿದ್ದ ಕಾರಣ ಅವರ ಹೆಸರಿನೊಡನೆ ಮೋಕ್ಷಗುಂಡಂ ಸೇರಿಕೊಂಡಿದೆ. ವಿಶ್ವೇಶ್ವರಯ್ಯನವರ ತಂದೆ ಸಂಸ್ಕೃತ ವಿದ್ವಾಂಸರು; ಧರ್ಮ ಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರಲ್ಲದೆ ಆಯುರ್ವೇದ ತಜ್ಞರೂ ಆಗಿದ್ದರು. ಅವರು ೧೫ ವರ್ಷದವರಿದ್ದಾಗಲೇ ತಂದೆಯು ನಿಧನರಾದರು. ವಿಶ್ವೇಶ್ವರಯ್ಯನವರು ತಮ್ಮ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು[]ಮುಗಿಸಿದರು . ೧೮೮೧ ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.
ವೃತ್ತಿಜೀವನ
ನಂತರ ವಿಶ್ವೇಶ್ವರಯ್ಯನವರು ೧೮೮೪ರಲ್ಲಿ ಮುಂಬಯಿ ನಗರದಲ್ಲಿ ಲೋಕೋಪಯೋಗಿ ಇಲಾಖೆಯನ್ನು ಸೇರಿದರು ಇದಾದ ನಂತರ ಭಾರತೀಯ ನೀರಾವರಿ ಆಯೋಗದಿಂದ ಅವರಿಗೆ ಆಮಂತ್ರಣ ಬಂದಿತು. ಈ ಆಯೋಗವನ್ನು ಸೇರಿದ ನಂತರ ದಖನ್ ಪ್ರಸ್ತಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯನವರು ಪರಿಚಯಿಸಿದರು. ಸರ್ ಎಂ. ವಿ. ಯವರು ಅರ್ಥರ್ ಕಾಟನ್ ರವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಕಾವೇರಿ ನದಿಗೆ ಅಣೆಕಟ್ಟು ಕಟ್ಟುವಲ್ಲಿ ಅವರು ತಿರುಚನಾಪಳ್ಳಿಯಲ್ಲಿ ಚೋಳ ರಾಜರಿಂದ ನಿರ್ಮಿಸಲ್ಪಟ್ಟ ಹಾಗೂ ೧೮ನೇ ಶತಮಾನದ ಅರ್ಧದಲ್ಲಿ ಅರ್ಥರ್ ಕಾಟನ್ ರವರಿಂದ ಸಂಪೂರ್ಣವಾಗಿ ನವೀಕರಿಸಲ್ಪಟ್ಟ ಬೃಹತ್ ಅಣೆಕಟ್ಟು [ಗ್ರಾಂಡ್ ಅಣಿಕಟ್] ನ್ನು ನೋಡಿ ಪ್ರಭಾವಿತರಾಗಿದ್ದರು. ನಂತರ ಮಹಾರಾಜರಲ್ಲಿ ಇದನ್ನು ವರದಿ ಮಾಡಿದ್ದರು. ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ 'ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸ' ವೂಂದನ್ನು ಕಂಡು ಹಿಡಿದು ಅದಕ್ಕಾಗಿ 'ಪೇಟೆಂಟ್' ಪಡೆದರು. ಮೊದಲ ಬಾರಿಗೆ ೧೯೦೩ ರಲ್ಲಿ ಈ ಫ್ಲಡ್ ಗೇಟ್ ಗಳು ಪುಣೆಯ 'ಖಡಕ್ವಾಸ್ಲಾ' ಅಣೆಕಟ್ಟಿನಲ್ಲಿ ಸ್ಥಾಪಿತವಾದವು. ಇಲ್ಲಿ ಅವು ಯಶಸ್ವಿಯಾದ ನಂತರ 'ಗ್ವಾಲಿಯರ್ ನ ಟಿಗ್ರಾ ಅಣೆಕಟ್ಟು' ಮತ್ತು ಕರ್ನಾಟಕದ 'ಕೃಷ್ಣರಾಜಸಾಗರ' ಅಣೆಕಟ್ಟುಗಳಲ್ಲಿ ಸಹ ಉಪಯೋಗಿತವಾದವು. ಈ ಗೇಟ್ ಗಳ ಉದ್ದೇಶ ಅಣೆಕಟ್ಟಿಗೆ ಹಾನಿ ಮಾಡದೆ ಗರಿಷ್ಠ ಮಟ್ಟದ ನೀರನ್ನು ಶೇಖರಿಸಿಡುವುದೇ ಆಗಿತ್ತು. ಕೃಷ್ಣರಾಜ ಸಾಗರವನ್ನು ಕಟ್ಟಿದಾಗ ಅದು ಆ ಕಾಲದಲ್ಲಿ ಭಾರತದ ಅತ್ಯಂತ ದೊಡ್ಡ ಅಣೆಕಟ್ಟು. ವಿಶ್ವೇಶ್ವರಯ್ಯನವರು ದೇಶದಾದ್ಯಂತ ಪ್ರಸಿದ್ಧರಾದದ್ದು ಹೈದರಾಬಾದ್ ನಗರವನ್ನು ಪ್ರವಾಹಗಳಿಂದ ರಕ್ಷಿಸಲು ಪ್ರವಾಹ ರಕ್ಷಣಾ ವ್ಯವಸ್ಥೆಯನ್ನು ಅವರು ಏರ್ಪಡಿಸಿದಾಗ. ಇವರ ಮುಖ್ಯ ಸೇವಕ ಪ್ರಶಾಂತ್.