text
stringlengths 0
2.67k
|
---|
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುಟ್ಟಪ್ಪ ಕೆ ವಿ |
Last edited ೨ months ago by Pavanaja |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಪುನೀತ್ ರಾಜ್ಕುಮಾರ್ |
ಕನ್ನಡ ಚಲನಚಿತ್ರ ನಟ |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ಡಾ|| ಪುನೀತ್ ರಾಜ್ಕುಮಾರ್ (೧೭ ಮಾರ್ಚ್ ೧೯೭೫ - ೨೯ ಅಕ್ಟೋಬರ್ ೨೦೨೧)ರವರು ಭಾರತೀಯ ಚಿತ್ರನಟ, ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕ ಮತ್ತು ಸಿನಿಮಾ ನಿರ್ಮಾಪಕ. ಇವರು ೨೯ ಕನ್ನಡ ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ. ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದರು. ವಸಂತ ಗೀತ (೧೯೮೦), ಭಾಗ್ಯವಂತ (೧೯೮೧), ಚಲಿಸುವ ಮೋಡಗಳು (೧೯೮೨), ಎರಡು ನಕ್ಷತ್ರಗಳು (೧೯೮೩), ಭಕ್ತ ಪ್ರಹ್ಲಾದ, ಯಾರಿವನು ಮತ್ತು ಬೆಟ್ಟದ ಹೂವು (೧೯೮೫) ಚಿತ್ರಗಳಲ್ಲಿ ನಟನೆಗೆ ಮೆಚ್ಚುಗೆ ಪಡೆದರು. ಅವರ ಬೆಟ್ಟದ ಹೂವು ಚಿತ್ರದ 'ರಾಮು' ಪಾತ್ರಕ್ಕೆ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾಗಿದ್ದರು. ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದರು. ಪುನೀತ್ ಅವರು ೨೦೦೨ರಲ್ಲಿ ಅಪ್ಪು ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಟನಾಗಿ ಸಿನಿಮಾರಂಗದ ಪಯಣ ಶುರುಮಾಡಿದರು.[೩] |
ಡಾ|| ಪುನೀತ್ ರಾಜ್ಕುಮಾರ್ |
ಜನನ |
ಲೋಹಿತ್ ರಾಜ್ಕುಮಾರ್ |
೧೭ ಮಾರ್ಚ್ ೧೯೭೫ [೧] |
ಮದ್ರಾಸ್ (ಈಗ ಚೆನ್ನೈ), ತಮಿಳುನಾಡು, ಭಾರತ |
ಮರಣ |
29 October 2021 (aged 46) [೨] |
ಬೆಂಗಳೂರು, ಕರ್ನಾಟಕ ಭಾರತ |
Monuments |
ಕಂಠೀರವ ಸ್ಟುಡಿಯೋಸ್ |
ಇತರೆ ಹೆಸರು |
ಅಪ್ಪು |
ಪವರ್ ಸ್ಟಾರ್ |
ಕನ್ನಡದ ರಾಜರತ್ನ |
ಯುವರತ್ನ |
ಬಾಕ್ಸ್ ಆಫೀಸ್ ಕಿಂಗ್ |
ವೃತ್ತಿ(ಗಳು) |
ನಟ, ಗಾಯಕ, ನಿರ್ಮಾಪಕ, ದೂರದರ್ಶನ ನಿರೂಪಕ, |
Years active |
1976 - 1989 |
2002 - 2022 |
ಸಂಗಾತಿ |
ಅಶ್ವಿನಿ ರೇವಂತ್ |
ಮಕ್ಕಳು |
2 |
ಪೋಷಕ(ರು) |
ಡಾ.ರಾಜ್ಕುಮಾರ್ (ತಂದೆ), ಪಾರ್ವತಮ್ಮ ರಾಜ್ಕುಮಾರ್ (ತಾಯಿ) |
Awards |
ಕರ್ನಾಟಕ ರತ್ನ |
ಅವರಿಗೆ ಅಭಿಮಾನಿಗಳು ಪವರ್ಸ್ಟಾರ್ ಎಂದು ಕರೆಯುತ್ತಾರೆ. ಅವರು ನಟಿಸಿದ ಅಪ್ಪು(೨೦೦೨), ಅಭಿ(೨೦೦೩), ವೀರಕನ್ನಡಿಗ(೨೦೦೪), ಮೌರ್ಯ(೨೦೦೪), ಆಕಾಶ್ (೨೦೦೫), ಅಜಯ್ (೨೦೦೬), ಅರಸು (೨೦೦೭), ಮಿಲನ (೨೦೦೭), ವಂಶಿ(೨೦೦೮), ರಾಮ್ (೨೦೦೯), ಪೃಥ್ವಿ(೨೦೧೦), ಜಾಕಿ(೨೦೧೦), ಹುಡುಗರು (೨೦೧೧), ಅಣ್ಣಾ ಬಾಂಡ್ (೨೦೧೨), ಪವರ್ (೨೦೧೪), ರಣವಿಕ್ರಮ (೨೦೧೫), ದೊಡ್ಮನೆ ಹುಡುಗ (೨೦೧೬), ರಾಜಕುಮಾರ (೨೦೧೭), ಯುವರತ್ನ(೨೦೨೧), ಜೇಮ್ಸ್ (೨೦೨೨) ಸೇರಿದಂತೆ ಇತರ ಹಲವು ಚಲನಚಿತ್ರಗಳು ಯಶಸ್ವಿಯಾಗಿ ಪ್ರದರ್ಶನಗೊಂಡಿವೆ. ಅವರು ಕನ್ನಡ ಚಿತ್ರರಂಗದ ಪ್ರಮುಖ ಹಾಗೂ ಅತ್ಯಂತ ಯಶಸ್ವಿ ನಾಯಕನಟರಾಗಿದ್ದರು. ಅವರು ಪ್ರಸಿದ್ಧ ಟಿವಿ ಆಟದ ಕಾರ್ಯಕ್ರಮ ಹೂ ವಾಂಟ್ಸ್ ಟು ಬಿ ಮಿಲಿಯನೇರ್ನ ಕನ್ನಡ ಆವೃತ್ತಿ ಕನ್ನಡದ ಕೋಟ್ಯಧಿಪತಿಯ ನಿರೂಪಣೆ ಮಾಡಿದ್ದಾರೆ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಕೂಡ ಆಗಿದ್ದರು.[೪] ಕರ್ನಾಟಕ ರಾಜ್ಯಸರ್ಕಾರದ ವಿವಿಧ ಯೋಜನೆಗಳ ರಾಯಭಾರಿಯಾಗಿ ಸಾಮಾಜಿಕ ಜಾಗೃತಿಯ ಪ್ರಚಾರಕರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. |
ಪರಿವಿಡಿ |
ವೈಯಕ್ತಿಕ ಜೀವನ |
ಬದಲಾಯಿಸಿ |
ಪುನೀತ್ರವರ(ಮೊದಲ ಹೆಸರು ಲೋಹಿತ್) ಡಾ.ರಾಜ್ಕುಮಾರ್ ಮತ್ತು ಪಾರ್ವತಮ್ಮ ರಾಜ್ಕುಮಾರ್ ದಂಪತಿಗೆ ಚೆನ್ನೈನಲ್ಲಿ ಜನಿಸಿದರು. ಇವರು ರಾಜಕುಮಾರ್ ದಂಪತಿಯ ಮೂರನೆ ಮತ್ತು ಕಿರಿಯ ಮಗ. ಇವರ ಸಹೋದರರಾದ ಶಿವರಾಜ್ಕುಮಾರ್ (ನಟ) ಮತ್ತು ರಾಘವೇಂದ್ರ ರಾಜ್ಕುಮಾರ್ (ನಟ) ಅವರು ಜನಪ್ರಿಯ ನಟರು. ಪುನೀತ್ ಆರು ವರ್ಷ ವಯಸ್ಸಿನವನಾಗಿದ್ದಾಗ ಅವರ ಕುಟುಂಬ ಮೈಸೂರಿಗೆ ಸ್ಥಳಾಂತರಗೊಂಡಿತು. ಅವರು ಹತ್ತು ವರ್ಷ ವಯಸ್ಸಿನವನಾಗುವವರೆಗೂ ಅವರ ತಂದೆ ಅವರನ್ನು ಮತ್ತು ಅವರ ಸಹೋದರಿ ಪೂರ್ಣಿಮಾರನ್ನು ಚಲನಚಿತ್ರದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಪುನೀತ್ ೧ ಡಿಸೆಂಬರ್ ೧೯೯೯ರಂದು ಚಿಕ್ಕಮಗಳೂರಿನ ಅಶ್ವಿನಿ ರೇವಂತ್ ರನ್ನು ವಿವಾಹವಾದರು. ಇವರಿಗೆ ಇಬ್ಬರು ಪುತ್ರಿಯರಿದ್ದಾರೆ. |
ನಟನಾ ವೃತ್ತಿ ಜೀವನ |
ಬದಲಾಯಿಸಿ |
೧೯೭೬ - ೧೯೮೯: ಬಾಲ ನಟನಾಗಿ |
ಬದಲಾಯಿಸಿ |
ನಿರ್ದೇಶಕ ವಿ. ಸೋಮಶೇಖರ್ ಅವರು ಪುನೀತ್ ಅವರನ್ನು ಆರು ತಿಂಗಳ ಮಗುವಾಗಿದ್ದಾಗ ಪ್ರೇಮದ ಕಾಣಿಕೆ (೧೯೭೬) ಮತ್ತು ಆರತಿ ಚಿತ್ರದಲ್ಲಿ ತೆರೆಯ ಮೇಲೆ ತೋರಿಸಿದರು.[೫] ಇದರ ನಂತರ ಪುನೀತ್ ಒಂದು ವರ್ಷದವನಾಗಿದ್ದಾಗ ವಿಜಯ್ ಅವರ ಕೃಷ್ಣಮೂರ್ತಿ ಪುರಾಣಿಕ್ ಅವರ ಕಾದಂಬರಿಯನ್ನು ಆಧರಿಸಿದ ಅದೇ ಹೆಸರಿನ ಸನಾದಿ ಅಪ್ಪಣ್ಣ (೧೯೭೭) ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.[೫] ತಾಯಿಗೆ ತಕ್ಕ ಮಗ (೧೯೭೮) ಮತ್ತೆ ವಿ. ಸೋಮಶೇಖರ್ ನಿರ್ದೇಶಿಸಿದ ಚಿತ್ರ ಮತ್ತು ಅವರ ತಂದೆ ನಟಿಸಿದ ಚಿತ್ರ.[೫] ಎರಡು ವರ್ಷಗಳ ನಂತರ ನಿರ್ದೇಶಕ ದೊರೆ-ಭಗವಾನ್ ಪುನೀತ್ ಅವರನ್ನು ವಸಂತ ಗೀತ ( ೧೯೮೦) ನಲ್ಲಿ ಶ್ಯಾಮ್ ಪಾತ್ರದಲ್ಲಿ ಹಾಕಿದರು.[೫] ಇದರ ನಂತರ ಕೆ. ಎಸ್. ಎಲ್. ಸ್ವಾಮಿಯವರ ಪೌರಾಣಿಕ ನಾಟಕ ಭೂಮಿಗೆ ಬಂದ ಭಗವಂತ (೧೯೮೧, ಭಗವಂತ ಕೃಷ್ಣನಾಗಿ ಕಾಣಿಸಿಕೊಂಡರು) ಮತ್ತು ಬಿ. ಎಸ್. ರಂಗ ಅವರ ಭಾಗ್ಯವಂತ (೧೯೮೨) ಚಿತ್ರದಲ್ಲಿ ಅವರು ಟಿ. ಜಿ. ಲಿಂಗಪ್ಪ ಸಂಯೋಜಿಸಿದ ತಮ್ಮ ಮೊದಲ ಜನಪ್ರಿಯ ಗೀತೆಬಾನ ದಾರಿಯಲ್ಲಿ ಸೂರ್ಯ ವನ್ನು ಧ್ವನಿಮುದ್ರಿಸಿದರು.[೫] ಅದೇ ವರ್ಷ ಅವರು ತಮ್ಮ ತಂದೆಯೊಂದಿಗೆ ಎರಡು ಜನಪ್ರಿಯ ಚಿತ್ರಗಳಲ್ಲಿ (ಚಲಿಸುವ ಮೋಡಗಳು ಮತ್ತು ಹೊಸ ಬೆಳಕು) ಕಾಣಿಸಿಕೊಂಡರು. ಚಲಿಸುವ ಮೋಡಗಳು ಮತ್ತು ಹೊಸ ಬೆಳಕು ಚಿತ್ರಕ್ಕಾಗಿ ಅವರು ತಮ್ಮ ಮೊದಲ ಅತ್ಯುತ್ತಮ ಬಾಲ ಕಲಾವಿದ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು(ಪುರುಷ) ಪಡೆದರು[೫]. ಅವರು ಎರಡು ಪೌರಾಣಿಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು: ಭಕ್ತ ಪ್ರಹ್ಲಾದ: ಮುಖ್ಯಪಾತ್ರವಾದ ಪ್ರಹ್ಲಾದನಾಗಿ ಮತ್ತು ಎರಡು ನಕ್ಷತ್ರಗಳು ಚಿತ್ರಕ್ಕಾಗಿ ತಮ್ಮ ಎರಡನೇ ಅತ್ಯುತ್ತಮ ಬಾಲ ಕಲಾವಿದ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು(ಪುರುಷ) ಪಡೆದರು. |
೧೯೮೪ರಲ್ಲಿ ಪುನೀತ್ ರಾಜ್ಕುಮಾರ್ ಅವರೊಂದಿಗೆ ಥ್ರಿಲ್ಲರ್ ಯಾರಿವನು ಚಿತ್ರದಲ್ಲಿ ನಟಿಸಿದರು ಮತ್ತು ರಾಜನ್-ನಾಗೇಂದ್ರ ಬರೆದ ಕಣ್ಣಿಗೆ ಕಾಣುವ ಹಾಡನ್ನು ಹಾಡಿದರು. ಬಾಲನಟನಾಗಿ ಅವರಿಗೆ ದೊಡ್ಡ ಬ್ರೇಕ್ ಕೊಟ್ಟ ಎನ್. ಲಕ್ಷ್ಮೀನಾರಾಯಣ ನಿರ್ದೇಶಿಸಿದ ಮತ್ತು ಶೆರ್ಲಿ ಎಲ್. ಅರೋರಾ ಅವರ ವಾಟ್ ತೆನ್, ರಾಮನ್? ಕಾದಂಬರಿ ಆಧಾರಿತ ೧೯೮೫ ರ ನಾಟಕ ಬೆಟ್ಟದ ಹೂವಿನಲ್ಲಿ ಮುಗ್ಧ ರಾಮು ಪಾತ್ರಕ್ಕಾಗಿ ಪುನೀತ್ ಅವರು ೩೩ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದರು. ಅವರ ಹದಿಹರೆಯದ ಆರಂಭದಲ್ಲಿ ಅವರು ಶಿವ ಮೆಚ್ಚಿದ ಕಣ್ಣಪ್ಪ (೧೯೮೮) ನಲ್ಲಿ ತನ್ನ ಹಿರಿಯ ಸಹೋದರ ಶಿವರಾಜ್ಕುಮಾರ್ (ನಟ)ನೊಂದಿಗೆ ಯುವ ಕಣ್ಣಪ್ಪನಾಗಿ ಕಾಣಿಸಿಕೊಂಡರು. ಪುನೀತ್ ಅವರು ಬಾಲನಟನಾಗಿ ಕೊನೆಯ ಪಾತ್ರವು ಪರಶುರಾಮ್ (೧೯೮೯) ಚಿತ್ರದಲಿ ಅವರ ತಂದೆಯೊಂದಿಗೆ ಆಗಿತ್ತು. |
೨೦೦೨-೨೦೦೭: ನಾಯಕನಾಗಿ ಪದಾರ್ಪಣೆ ಮತ್ತು ಮಹತ್ವದ ತಿರುವು |
ಬದಲಾಯಿಸಿ |
ಏಪ್ರಿಲ್ ೨೦೦೨ ರಲ್ಲಿ ಪುನೀತ್ ಅವರು ಗುರುಕಿರಣ್ ಸಂಗೀತದ ಪುರಿ ಜಗನ್ನಾಥ್ ನಿರ್ದೇಶನದ ಮತ್ತು ಪಾರ್ವತಮ್ಮ ರಾಜ್ಕುಮಾರ್ ನಿರ್ಮಾಣದ ಮೊದಲ ಚಲನಚಿತ್ರ ಅಪ್ಪು ಮೂಲಕ ಚಲನಚಿತ್ರಕ್ಕೆ ಪ್ರಮುಖ ಪಾತ್ರದಲ್ಲಿ ಪಾದಾರ್ಪಣೆ ಮಾಡಿದರು. ಅದು ನಟಿ ರಕ್ಷಿತಾ ಅವರ ಮೊದಲ ಚಲನಚಿತ್ರ ಕೂಡ ಆಗಿತ್ತು. ಇದರಲ್ಲಿ ಅವರು ಕಾಲೇಜು ಹುಡುಗನ ಪಾತ್ರವನ್ನು ನಿರ್ವಹಿಸಿದ್ದರು ಮತ್ತು ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಯಶಸ್ವಿಯಾಯಿತು ಮತ್ತು ವಿಮರ್ಶಕರು ಅವರ ನೃತ್ಯ ಕೌಶಲ್ಯವನ್ನು ಶ್ಲಾಘಿಸಿದರು. ಈ ಸಿನಿಮಾದಲ್ಲಿ ಪುನೀತ್ ಅವರು ಉಪೇಂದ್ರ ಸಾಹಿತ್ಯದ ಮತ್ತು ಗುರುಕಿರಣ್ ಸಂಗೀತದತಾಲಿಬಾನ್ ಅಲ್ಲಾ ಅಲ್ಲ ಹಾಡನ್ನು ಹಾಡಿದ್ದಾರೆ. ಚಿತ್ರದ ಯಶಸ್ಸು ತೆಲುಗುನಲ್ಲಿ (ಈಡಿಯಟ್ (೨೦೦೩)) ಮತ್ತು ತಮಿಳಿನಲ್ಲಿ (ದಮ್ (೨೦೦೩)) ರೀಮೇಕ್ಗಳನ್ನು ಹುಟ್ಟುಹಾಕಿತು. |
ಪುನೀತ್ ನಂತರ ದಿನೇಶ್ ಬಾಬು ಅವರ ಅಭಿ (೨೦೦೩) ನಲ್ಲಿ ತಾಯಿಗೆ ತಕ್ಕ ಮಗ ಹಾಗೂ ಕಾಲೇಜು ಹುಡುಗನಾಗಿ ಕಾಣಿಸಿಕೊಂಡರು. ಇದು ನೈಜ ಕಥೆಯನ್ನು ಆಧರಿಸಿದ ಮತ್ತು ಪಾರ್ವತಮ್ಮ ರಾಜ್ಕುಮಾರ್ ನಿರ್ಮಿಸಿದ ಚಿತ್ರ ಪುನೀತ್ ಅವರು ನಟಿ ರಮ್ಯಾ ಅವರೊಂದಿಗೆ ನಟಿಸಿದ್ದಾರೆ. ಇದು ನಟಿ ರಮ್ಯಾ ಅವರ ಮೊದಲ ಚಿತ್ರ. |
ಮೆಹರ್ ರಮೇಶ್ ಅವರ ವೀರ ಕನ್ನಡಿಗ ಪುನೀತ್ ಅವರ ೨೦೦೪ ರಲ್ಲಿ ಬಿಡುಗಡೆ ಆದ ಮೊದಲ ಚಿತ್ರ. ಪುರಿ ಜಗನ್ನಾಥ್ ಬರೆದಿರುವ ಈ ಚಿತ್ರವನ್ನು ಏಕಕಾಲದಲ್ಲಿ ತೆಲುಗಿನಲ್ಲಿ ಆಂಧ್ರವಾಲಾ ಎಂಬ ಹೆಸರಿನಲ್ಲಿ ನಿರ್ಮಿಸಲಾಯಿತು ಇದರಲ್ಲಿ ಎನ್. ಟಿ. ರಾಮರಾವ್ ಜೂನಿಯರ್ ರವರು ಪ್ರಮುಖ ಪಾತ್ರದಲ್ಲಿ ಇದ್ದರು. ಈ ಚಿತ್ರದಲ್ಲಿ ಚೊಚ್ಚಲ ನಟಿ ಅನಿತಾ ಜೋಡಿಯಾಗಿದ್ದರು. ಈ ಚಿತ್ರ ಅವರ ನೃತ್ಯ ಮತ್ತು ಸಾಹಸ ಕೌಶಲ್ಯಗಳನ್ನು ಪ್ರದರ್ಶಿಸಿತು. ಚಿತ್ರದ ಹಿಂಸಾಚಾರ ಮತ್ತು ಕಳಪೆ ಕಥಾವಸ್ತು ಬಗ್ಗೆ ಟೀಕಿಸಿದರೂ ಅದು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಪುನೀತ್ ನಂತರ ಎಸ್. ನಾರಾಯಣ್ ಅವರ ಕೌಟುಂಬಿಕ ನಾಟಕ ಮೌರ್ಯದಲ್ಲಿ ನಟಿಸಿದರು. ಇದು ರವಿತೇಜ ನಟಿಸಿದ ಮತ್ತು ಪುರಿ ಜಗನ್ನಾಥ್ ಬರೆದ ತೆಲುಗಿನ ಅಮ್ಮಾ ನನ್ನ ಓ ತಮಿಳ ಅಮ್ಮಾಯಿಯ ರಿಮೇಕ್. ಈ ಚಿತ್ರ ಅವರನ್ನು ನಟನಾಗಿ ಖ್ಯಾತಿಯನ್ನು ಹೆಚ್ಚಿಸಿತು. |
ಅವರು ೨೦೦೫ ರಲ್ಲಿ ಎರಡು ಚಲನಚಿತ್ರಗಳನ್ನು ಬಿಡುಗಡೆ ಮಾಡಿದರು. ಮಹೇಶ್ ಬಾಬು ಅವರ ಆಕಾಶ್ ಪುನೀತ್ ಮತ್ತು ರಮ್ಯಾ ಅವರನ್ನು (ಅಭಿಯಿಂದ) ಮತ್ತೆ ಜೊತೆ ಸೇರಿಸಿತು ಮತ್ತು ಅವರು ವೀರ ಶಂಕರ್ ಅವರ ಸಾಹಸ ಚಿತ್ರ ನಮ್ಮ ಬಸವದಲ್ಲಿ ಗೌರಿ ಮುಂಜಾಲ್ ಅವರೊಂದಿಗೆ ಕಾಣಿಸಿಕೊಂಡರು. ಅವರು ಎರಡೂ ಚಿತ್ರಗಳಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ. ಅಜಯ್ ಮೆಹರ್ ರಮೇಶ್ ನಿರ್ದೇಶನದ ಮತ್ತು ರಾಕ್ಲೈನ್ ವೆಂಕಟೇಶ್ ನಿರ್ಮಿಸಿದ ೨೦೦೬ ರಲ್ಲಿ ಬಿಡುಗಡೆಯಾದ ಪುನೀತ್ ಅವರ ಏಕೈಕ ಚಿತ್ರ ಇದು ೨೦೦೩ ರ ತೆಲುಗು ಒಕ್ಕಡು ಚಿತ್ರದ ರಿಮೇಕ್ ಅವರು ಈ ಚಿತ್ರದಲ್ಲಿ ವೃತ್ತಿಪರ ಕಬಡ್ಡಿ ಆಟಗಾರನ ಪಾತ್ರವನ್ನು ನಿರ್ವಹಿಸಿದರು. ಅವರು ಈ ಚಿತ್ರದಲ್ಲಿ ತಮ್ಮ ಚಿಕ್ಕಪ್ಪನಿಂದ (ಪ್ರಕಾಶ್ ರಾಜ್ ನಿರ್ವಹಿಸಿದ) ಅಪಾಯದಲ್ಲಿದ ಹುಡುಗಿಯನ್ನು ರಕ್ಷಿಸುತ್ತಾರೆ. ಈ ಚಿತ್ರಗಳ ಪರಿಣಾಮವಾಗಿ ಪುನೀತ್ ಅವರನ್ನು ಸ್ಯಾಂಡಲ್ವುಡ್ನ ಪವರ್ಸ್ಟಾರ್ ಎಂದು ಕರೆಯಲಾಯಿತು. |
ಅರಸು ಪುನೀತ್ ಅವರ ನಿರ್ಮಾಣದ ಮಹೇಶ್ ಬಾಬು ನಿರ್ದೇಶಿಸಿದ ೨೦೦೭ ರಲ್ಲಿ ಬಿಡುಗಡೆಯಾದ ಮೊದಲ ಚಿತ್ರ ಇದರಲ್ಲಿ ಅವರು ಹೊರದೇಶದಿಂದ ಬಂದ ಉದ್ಯಮಿಯಾಗಿ ನಟಿಸಿದರು. ಈ ಚಿತ್ರದಲ್ಲಿ ಅವರು ಪ್ರೀತಿಸುವ ಮಹಿಳೆಗಾಗಿ ತಮ್ಮ ಸಂಪತ್ತನ್ನು ತ್ಯಜಿಸುತ್ತಾರೆ. ಅವರ ಅಭಿನಯಕ್ಕಾಗಿ ಅವರು ತಮ್ಮ ಮೊದಲ ಫಿಲ್ಮ್ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಆ ವರ್ಷ ಪುನೀತ್ ಅವರ ಬಿಡುಗಡೆಯಾದ ಇನ್ನೊಂದು ಚಿತ್ರ ಪ್ರಕಾಶ್ರ ಸಾಂಪ್ರದಾಯಿಕ ಕೌಟುಂಬಿಕ ಮೌಲ್ಯಗಳ ಚಿತ್ರ ಮಿಲನ. ನಟಿ ಪಾರ್ವತಿ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಅವರು ಆಕಾಶ್ ಎಂಬ ರೇಡಿಯೋ ಜಾಕಿಯಾಗಿ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ತಮ್ಮ ಮೊದಲ ಅತ್ಯುತ್ತಮ ನಟ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. |
೨೦೦೮-೨೦೧೫: ಇತರೆ ಚಲನಚಿತ್ರಗಳು |
ಬದಲಾಯಿಸಿ |
ಪುನೀತ್ ೨೦೦೮ ರಲ್ಲಿ ಎರಡು ಚಲನಚಿತ್ರಗಳನ್ನು ಬಿಡುಗಡೆ ಮಾಡಿದರು: ಡಿ. ರಾಜೇಂದ್ರ ಬಾಬು ಅವರ ಬಿಂದಾಸ್ ಮತ್ತು ಪ್ರಕಾಶ್ ಅವರ ವಂಶಿ. ೨೦೦೯ರಲ್ಲಿ ಬಿಡುಗಡೆ ಆದ ಮೊದಲ ಚಿತ್ರ ರಾಜ್ - ದಿ ಶೋಮ್ಯಾನ್(ನಿರ್ದೇಶನ ಪ್ರೇಮ್) ಟೀಕೆಗೆ ಒಳಗಾಗಿದ್ದರೂ ಪುನೀತ್ ಅವರ ಅಭಿನಯವನ್ನು ಪ್ರಶಂಸಿಸಲಾಯಿತು. ಪ್ರಿಯಾಮಣಿ ಜೊತೆಗಿನ ಅವರ ಇನ್ನೊಂದು ಚಿತ್ರ ರಾಮ್ ತೆಲುಗು ಹಿಟ್ ರೆಡಿ ಚಿತ್ರದ ರಿಮೇಕ್ ಆಗಿತ್ತು. |
ಪುನೀತ್ ೨೦೧೦ರಲ್ಲಿ ಒಂದರ ಹಿಂದೊಂದು ಹಿಟ್ಗಳೊಂದಿಗೆ ಜನಮನಕ್ಕೆ ಮರಳಿದರು. ಮೊದಲನೆ ಚಿತ್ರ ಜಾಕೋಬ್ ವರ್ಗೀಸ್ ಅವರ ರಾಜಕೀಯ ಥ್ರಿಲ್ಲರ್ ಪೃಥ್ವಿ, ಇದರಲ್ಲಿ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಬಳ್ಳಾರಿ ಜಿಲ್ಲೆಯ ಅಧಿಕಾರಿಯಾಗಿ ನಟಿಸಿದ್ದಾರೆ. ಅವರ ಮುಂದಿನ ಬಿಡುಗಡೆಯು ದುನಿಯಾ ಸೂರಿ ನಿರ್ದೇಶಿಸಿದ ಸಾಹಸ ಚಿತ್ರ ಜಾಕಿ, ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ೨೦೧೧ ರಲ್ಲಿ ಪುನೀತ್ ಅವರು ಕೆ. ಮಾದೇಶ್ ಅವರ ಹುಡುಗರು ತಮಿಳಿನಲ್ಲಿ ನಾಡೋಡಿಗಳು ನ ರಿಮೇಕ್ ನಲ್ಲಿ ನಟಿಸಿದರು. ಅವರ ಅಭಿನಯಕ್ಕಾಗಿ ಅವರು ತಮ್ಮ ಎರಡನೇ ಫಿಲ್ಮ್ಫೇರ್ ಮತ್ತು ಮೊದಲ ಸೈಮಾ (ಎಸ್,ಐ,ಐ,ಎಮ್, ಎ) ಅತ್ಯುತ್ತಮ ನಟ ಪ್ರಶಸ್ತಿಗಳನ್ನು ಪಡೆದರು. ಪುನೀತ್ ಅವರ ಮುಂದಿನ ಚಿತ್ರ ಯೋಗರಾಜ್ ಭಟ್ ಅವರ ಪರಮಾತ್ಮ. ಪುನೀತ್ ಅವರ ಪಾತ್ರವು ಈ ಚಿತ್ರದಲ್ಲಿ ಪ್ರೀತಿಯನ್ನು ಹುಡುಕುತ್ತದೆ. |
ಅವರು ಮತ್ತೆ ೨೦೧೨ ರಲ್ಲಿ ಪಾರ್ವತಮ್ಮ ರಾಜ್ಕುಮಾರ್ ನಿರ್ಮಿಸಿದ ಆಕ್ಷನ್ ಚಿತ್ರ ಅಣ್ಣಾ ಬಾಂಡ್ನಲ್ಲಿ ಸೂರಿ ಅವರೊಂದಿಗೆ ಕೆಲಸ ಮಾಡಿದರು. ಅವರ ಅಭಿನಯಕ್ಕಾಗಿ ಅವರು ಸುವರ್ಣ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು ಮತ್ತು ಐಫಾ (ಐ,ಐ,ಎಫ್,ಎ) ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ಪುನೀತ್ ಅವರ ಮುಂದಿನ ಚಿತ್ರ ಸಮುತಿರಕನಿ ನಿರ್ದೇಶನದ ಯಾರೇ ಕೂಗಾಡಲಿ ಇದು ತಮಿಳಿನ ಪೊರಾಲಿಯ ರಿಮೇಕ್. |
೨೦೧೪ ರಲ್ಲಿ ಪುನೀತ್ ಎರಿಕಾ ಫೆರ್ನಾಂಡಿಸ್ ಅವರೊಂದಿಗೆ ಜಯಂತ್ ಸಿ. ಪರಂಜಿ ಅವರ ನಿನ್ನಿಂದಲೇ ಚಿತ್ರದಲ್ಲಿ ನಟಿಸಿದರು. ಅವರು ಈ ಚಿತ್ರದಲ್ಲಿ ನ್ಯೂಯಾರ್ಕ್ ಮೂಲದ ನ್ಯೂಯಾರ್ಕ್ ಸಾಹಸ ಉತ್ಸಾಹಿಯಾಗಿ ಅವರ ಅಭಿನಯವು ವಿಮರ್ಶಕರಿಂದ ಪ್ರಶಂಸಿಸಲ್ಪಟ್ಟಿತ್ತು. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ಪುನೀತ್ ಅವರ ಮುಂದಿನ ಚಿತ್ರ ಕೆ. ಮಾದೇಶ್ ಅವರ ಪವರ್ ಇದು ತೆಲುಗಿನ ದೂಕುಡು ಚಿತ್ರದ ರಿಮೇಕ್ ಆಗಿದೆ. ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ತ್ರಿಶಾ ಜೊತೆ ಕಾಣಿಸಿಕೊಂಡಿದ್ದರು. ಅವರು ಈ ಚಿತ್ರದಲ್ಲಿ ಕಠಿಣ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು. ಈ ಚಿತ್ರ ಆರು ದಿನಗಳಲ್ಲಿ ದಾಖಲೆಯ ₹೨೨ ಕೋಟಿ (₹೨೨೦ ಮಿಲಿಯನ್) ಗಳಿಸಿ ಬಾಕ್ಸ್ ಆಫೀಸ್ ಹಿಟ್ ಆಯಿತು. ೨೦೧೫ ರಲ್ಲಿ, ಅವರು ಬಿ. ಎಮ್. ಗಿರಿರಾಜ್ ಅವರ ಮೈತ್ರಿ ಚಿತ್ರದಲ್ಲಿ ಪುನೀತ್ ನಟ ಮತ್ತು ಕನ್ನಡದ ಕೋಟ್ಯಧಿಪತಿಯ ನಿರೂಪಕರಾಗಿ ನಟಿಸಿದ್ದರು ಇದರಲ್ಲಿ ಮೋಹನ್ ಲಾಲ್ ಮತ್ತು ಭಾವನಾ ಕೂಡ ನಟಿಸಿದ್ದಾರೆ. ಆ ವರ್ಷ ಬಿಡುಗಡೆ ಆದ ಇನ್ನೊಂದು ಚಿತ್ರ ಅದಾ ಶರ್ಮಾ ಮತ್ತು ಅಂಜಲಿ ಜೊತೆ ನಟಿಸಿರುವ ಪವನ್ ಒಡೆಯರ್ ಅವರ ಸಾಹಸ ಚಿತ್ರ ರಣ ವಿಕ್ರಮ ಕೂಡ ಬಾಕ್ಸ್ ಆಫೀಸ್ ಹಿಟ್ ಆಗಿ ಮತ್ತೆ ಫಿಲಂ ಫೇರ್ ಸೈಮಾ ಪ್ರಶಸ್ತಿಗಳನ್ನು ಮುಡಿಗೇರಿಸಿತು. |
೨೦೧೬-೨೦೨೧ |
ಬದಲಾಯಿಸಿ |
ಮಾರ್ಚ್ ೨೦೧೬ ರಲ್ಲಿ ಪುನೀತ್ ಎಂ. ಸರವಣನ್ ಅವರ ಚಕ್ರವ್ಯೂಹ ಮತ್ತು ದುನಿಯಾ ಸೂರಿ ಅವರ ದೊಡ್ಮನೆ ಹುಡ್ಗ ಚಿತ್ರಗಳಿಗೆ ಕೆಲಸ ಮಾಡಿದರು. ೨೦೧೭ ರಲ್ಲಿ ಅವರು ಸಂತೋಷ್ ಆನಂದ್ ರಾಮ್ ಅವರ ರಾಜಕುಮಾರ ಚಿತ್ರದಲ್ಲಿ ಕಾಣಿಸಿಕೊಂಡರು ಇದು ಬಾಕ್ಸ್ ಆಫೀಸ್ನಲ್ಲಿ ಎಲ್ಲಾ ದಾಖಲೆಗಳನ್ನು ಮುರಿದು ಮುಂಗಾರು ಮಳೆಯ ಹಿಂದಿನ ದಾಖಲೆಯನ್ನು ಹಿಂದಿಕ್ಕಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಭಾಷೆಯ ಚಲನಚಿತ್ರವಾಯಿತು. ಹರ್ಷರವರ ಅಂಜನಿ ಪುತ್ರದಲ್ಲಿ ರಶ್ಮಿಕಾ ಮಂದಣ್ಣ ಪುನೀತ್ ಅವರ ಜೊತೆ ನಟಿಸಿದರು. ಇದು ತಮಿಳಿನ ಪೂಜಾಯ್ ಚಿತ್ರದ ರೀಮೇಕ್. ಅನುಪ್ ಭಂಡಾರಿ ನಿರ್ದೇಶನದ ರಾಜರಥ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಿರೂಪಕನ ಪಾತ್ರದಲ್ಲಿ ನಟಿಸಿದ್ದಾರೆ. ೨೦೧೯ ರಲ್ಲಿ ಅವರ ಚಲನಚಿತ್ರ ನಟಸಾರ್ವಭೌಮ ಬಿಡುಗಡೆಯಾಯಿತು ಮತ್ತು ವಾಣಿಜ್ಯವಾಗಿ ಯಶಸ್ಸನ್ನು ಸಹ ಗಳಿಸಿತು. ಇತ್ತಿಚಿನ ಯುವರತ್ನ ಮತ್ತು ಜೇಮ್ಸ್ ಕೂಡ ಭರ್ಜರಿ ಗಳಿಕೆ ಮಾಡಿದವು. |
ಬಾಲ ನಟನಾಗಿ |
ಬದಲಾಯಿಸಿ |
ಸಂಖ್ಯೆ ವರ್ಷ ಚಿತ್ರದ ಹೆಸರು ಪ್ರಮುಖ ಪಾತ್ರದಲ್ಲಿ ನಿರ್ದೇಶನ ನಿರ್ಮಾಪಕರು |
೧ ೧೨ ಜನವರಿ ೧೯೬೭ ಭಕ್ತ ಪ್ರಹ್ಲಾದ ರೋಜಾ ರಮಣಿ, ಎಸ್.ವಿ.ರಂಗರಾವ್, ಅಂಜಲಿ ದೇವಿ ಚಿತ್ರಪು ನಾರಾಯಣ ರಾವ್ ಎ.ವಿ.ಮೇಯಪ್ಪನ್; ಎಂ. ಮುರುಗನ್; ಎಂ.ಕುಮಾರನ್; ಎಂ. ಸರವಣನ್ |
೨ ೧೯೭೬ ಪ್ರೇಮದ ಕಾಣಿಕೆ ಡಾ.ರಾಜ್ಕುಮಾರ್, ಆರತಿ, ತೂಗುದೀಪ ಶ್ರೀನಿವಾಸ್, ಬಾಲಕೃಷ್ಣ ವಿ.ಸೋಮಶೇಖರ್ ಜಯದೇವಿ |
೩ ೧೯೭೭ ಭಾಗ್ಯವಂತ ಡಾ.ರಾಜ್ಕುಮಾರ್, ಆರತಿ, ಕಾಂಚನಾ ಬಿ ಎಸ್ ರಂಗ |
೪ ೧೯೮೦ ವಸಂತ ಗೀತ ಡಾ.ರಾಜ್ಕುಮಾರ್, ಕೆ ಎಸ್ ಅಶ್ವಥ್, ಶ್ರೀನಿವಾಸ ಮೂರ್ತಿ ಬಿ.ದೊರೈರಾಜ್ |
೫ ೨೯ ಅಕ್ಟೋಬರ್ ೧೯೮೨ ಚಲಿಸುವ ಮೋಡಗಳು ಡಾ.ರಾಜ್ಕುಮಾರ್, ಅಂಬಿಕಾ, ಕೆ ಎಸ್ ಅಶ್ವಥ್ ಸಿಂಗೀತಂ ಶ್ರೀನಿವಾಸ ರಾವ್ |
೬ ೧೯೮೩ ಎರಡು ನಕ್ಷತ್ರಗಳು ಡಾ.ರಾಜ್ಕುಮಾರ್, ಅಂಬಿಕಾ, ಶಿವರಾಂ ಸಿಂಗೀತಂ ಶ್ರೀನಿವಾಸ ರಾವ್ |
೭ ೧೯೮೪ ಯಾರಿವನು ಡಾ.ರಾಜ್ಕುಮಾರ್, ಬಿ.ಸರೋಜಾದೇವಿ, ಶೃಂಗಾರ್ ನಾಗರಾಜ್ ಬಿ.ದೊರೈರಾಜ್ |
೮ ೧೯೮೫ ಬೆಟ್ಟದ ಹೂವು ಪದ್ಮಾ ವಾಸಂತಿ, ಶಂಕನಾದ ಅರವಿಂದ್, ಹೊನ್ನವಳ್ಳಿ ಕೃಷ್ಣ ಎನ್.ಲಕ್ಷ್ಮೀನಾರಾಯಣ |
Subsets and Splits
No saved queries yet
Save your SQL queries to embed, download, and access them later. Queries will appear here once saved.